ರಚನೆ: ಹೆಳವನಕಟ್ಟೆ ಗಿರಿಯಮ್ಮ ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್
ಕಟ್ಟಿದರು ಮಂಡೆಯ ಪಾವುಡೆಯಲಿ ಕೊಟ್ಟರೆ ಖಾರ ಚರ್ವಣೆಯ
ಇಟ್ಟರೆ ಅಷ್ಟದಿಕ್ಕಿಗೆ ಎಂಟು ರಕ್ಷೆಯ ಹರಸಿ ಆರತಿಯನೆತ್ತಿದರು
ಅಂಧಕಾರವು ಕವಿದವು ಚಂದ್ರ ಮುಳುಗಿದ ಮಂದಿಯ ಉಲುಹು ತಗ್ಗಿದವು
ಕಂದನ ಮುಂದಿಟ್ಟು ನೊಂದಳೆ ಮನದಲಿ ಮುಂದೇನು ಇದಕೆ ಉಪಾಯ
ಈತನಾದರೆ ತನ್ನ ತಾತನ ತೋರೆಂಬ ಲೋಕದೊಳಗೆ ಪರಿಹಾಸ್ಯ
ಮಾತಾಪಿತರು ಎಲ್ಲಿಪ್ಪರೆಂದರಿಯೆನು ಕ್ಷತಿಯಾಯಿತು ಎನ್ನ ಬದುಕು
ಪುತ್ರನೆಂದುಳಹಿಕೊಂಬೆನೆ ಲೋಕ ನಗುವುದು ಒತ್ತಿ ಕೊಂದರೆ ಪಾತಕವು
ಎತ್ತಿಕೊಂಡ್ಹೋಗಿ ತುಂಬಿದ ನದಿಯಲಿ ಬಿಟ್ಟು ಬರುವುದೆ ಉಚಿತವು
ನಿಮ್ಮ ಟಿಪ್ಪಣಿ ಬರೆಯಿರಿ