ಹೆಳವನಕಟ್ಟೆ ಗಿರಿಯಮ್ಮ – ಧಾರಾವಾಹಿಗೆ 100 ಕಂತುಗಳನ್ನು ಪೂರೈಸಿದ ಸಂಭ್ರಮ

10ನೇ ಜುಲೈ 2009ರಂದು, ವಾಗ್ದೇವಿ ಕ್ರಿಯೇಷನ್ ಗೆ ಸಂಭ್ರಮದ ದಿನ.  ಅಂದು ನಮ್ಮ ಸಂಸ್ಥೆ ನಿರ್ಮಿಸುತ್ತಿರುವ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಯ 100ನೇ ಕಂತು ಈಟೀವಿ ಉಪಗ್ರಹವಾಹಿನಿಯಲ್ಲಿ ಪ್ರಸಾರಗೊಳ್ಳುವ ಸಂದರ್ಭ.

ನಮ್ಮ ಧಾರಾವಾಹಿಗೆ ಸಂಬಂಧಪಟ್ಟ ವಿವರಗಳನ್ನು ದಾಖಲಿಸುವ ಪ್ರಯತ್ನ, ಈ ಬ್ಲಾಗ್.

ಮುಖ್ಯವಾಗಿ ಧಾರಾವಾಹಿಯಲ್ಲಿ ಉಪಯೋಗಿಸಿರುವ ದಾಸರ ಕೀರ್ತನೆಗಳು, ಕತೆಯ ವಿವರಗಳು, ಧಾರಾವಾಹಿಯನ್ನು ನಿರ್ಮಿಸುವಲ್ಲಿ ಪಾಲುದಾರರಾದ ಕಲಾವಿದರು, ತಂತ್ರಜ್ಞರ ಕಿರು ಪರಿಚಯಗಳು ಮತ್ತು ಅಭಿಮಾನಿ ಪ್ರೇಕ್ಷಕರ ಅಭಿಪ್ರಾಯಗಳು, ಇವುಗಳನ್ನು ಒಂದು ಕಡೆ ದಾಖಲಿಸ ಬೇಕೆಂಬ ಹಂಬಲದ ಸಾಕಾರ ಈ ಬ್ಲಾಗ್.

ಸಂಚಿಕೆ-248

ತನ್ನ ಕೈಯಲ್ಲಿ ಚಿನ್ನದ ವ್ಯವಸ್ಥೆ ಮಾಡಲು ಆಗುತ್ತಿಲ್ಲ, ಈಗ ಬ್ರಾಹ್ಮಣ ರಾತ್ರಿ ಮಳೆಯಲ್ಲಿ ಹೊರಗೆ ಇದ್ದು, ಏನಾದರೂ ಅನಾಹುತವಾದರೆ, ಈಗಾಗಲೆ ಚಿನ್ನವ್ಯಾಮೋಹಿ ಎಂದು ಊರಿನಲ್ಲಿ ಹೆಸರಾಗಿರುವ ನಮಗೆ ಹತ್ಯಾ ದೋಷವು ಉಂಟಾಗುವುದು ಎಂದು ಚಿಕ್ಕಪ್ಪ ಮನೆಯಲ್ಲಿ ಗೋಳಾಡುವರು. ಮಳೆ ಬರಲು ಪ್ರಾರಂಭವಾಗಿ, ಬ್ರಾಹ್ಮಣ ಒದ್ದಾಡುತ್ತ ಹೊರಗೆ ಇದ್ದಾಗ, ಗಿರಿ ದೇವರ ಮೊರೆ ಹೋಗಿ “ಕರುಣಾಕರ ನೀನೆಂಬುವುದ್ಯಾಕೋ” ಕೀರ್ತನೆಯನ್ನು ಹಾಡುವಳು. ಕೀರ್ತನೆ ಮಧ್ಯೆ ಮನೆಯ ಹೊರಾವರಣದಲ್ಲಿ ಇದ್ದ ಮೋಟುಗೋಡೆ ಮಳೆಯಿಂದಾಗಿ ಶಿಥಿಲವಾಗಿ ಬೀಳುವುದು. ಅದರೊಳಗೆ ಅಡಗಿಸಿಟ್ಟಿದ್ದ ಮಡಕೆಯೊಂದು ಮುರಿದು, ಒಳಗೆ ಇದ್ದ ಚಿನ್ನದ ಆಭರಣಗಳು ಕಾಣಿಸುವುದು

Read the rest of this entry »

ಕರುಣಾಕರ ನೀನೆಂಬುವುದ್ಯಾತಕೋ

ರಚನೆ: ಪುರಂದರ ದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಕರುಣಾಕರ ನೀನೆಂಬುವುದ್ಯಾತಕೋ
ಭರವಸೆ ಇಲ್ಲೆನಗೆ
ಪರಿಪರಿಯಲಿ ನರಜನ್ಮವನಿತ್ತು
ತಿರುಗಿತಿರುಗಿ ಮನಕರಗಿಸುವುದ ಕಂಡು

Read the rest of this entry »

ಸಂಚಿಕೆ-247

ಇಂದ್ರನಿಗೆ ಧ್ರುವನ ಎರಡನೇ ತಿಂಗಳಿನ ತಪಸ್ಸಿನ ಬಗ್ಗೆ ದೇವ ಹೇಳಿದಾಗ, ಇಂದ್ರನಿಗೆ ಯೋಚನೆ ಪ್ರಾರಂಭ. ಆದರೆ ಪ್ರತ್ಯಕ್ಷರಾದ ನಾರದ ಮಹರ್ಷಿ, ಇಂದ್ರನ ಯೋಚನೆಯನ್ನು ನಿವಾರಿಸಿ, ಧ್ರುವನ ತಪಸ್ಸಿನ ಬಗ್ಗೆ ಕೇವಲವಾಗಿ ಮಾತನಾಡಿ, ಅವನು ಅದನ್ನು ಉಪೇಕ್ಷೆ ಮಾಡುವಂತೆ ಮಾಡುವರು

Read the rest of this entry »

ಸಂಚಿಕೆ-246

ಗೌರಜ್ಜಿ ಮತ್ತು ರಮಾ ಅವರಿಗೆ ಗೊತ್ತಾಗದಂತೆ ಕದ್ದುಮುಚ್ಚಿ ಶಾರದಳನ್ನು ಸಂಗೀತದ ಅಭ್ಯಾಸಕ್ಕೆ ಕಳಿಸುವ ತುಂಗ. ದಿಡೀರನೆ ಅವರು ಪ್ರಶ್ನಿಸಿದಾಗ, ತಬ್ಬಿಬಾದರೂ, ಸುಳ್ಳು ಹೇಳಿ ಬಚಾವಾಗುವ ತುಂಗ

Read the rest of this entry »

ಸಂಚಿಕೆ-245

ಸಾಲಕ್ಕಾಗಿ ಪ್ರಯತ್ನಪಟ್ಟು ವಿಫಲನಾದ ವಿಷಯ ಹೇಳಿದಾಗ, ಆ ರೀತಿಯೆಲ್ಲ ಸಾಲ ಮಾಡಿ ಚಿನ್ನ ಕೊಡುವ ದುಸ್ಸಾಹಸ ಬೇಡ ಎನ್ನುವ ಚಿಕ್ಕಮ್ಮ, ಸಾಲ ಸಿಕ್ಕರೂ ಚಿನ್ನವನ್ನು ಕೊಡಬಾರದು ಎಂದು ಚಿಕ್ಕಪ್ಪನ ಬಾಯಿ ಮುಚ್ಚಿಸುವರು. ಗಿರಿ “ಈ ಸಿರಿಯ ನಂಬಿ ಹಿಗ್ಗಲು ಬೇಡ” ಕೀರ್ತನೆ ಹಾಡುವಳು

Read the rest of this entry »

ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ

ರಚನೆ: ಕನಕ ದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ
ವಾಸುದೇವನ ಭಜಿಸೊ ಒರಟು ಜೀವನವೆ

Read the rest of this entry »

ಸಂಚಿಕೆ-244

ಚಿಕ್ಕಪ್ಪ ಸಾಲಕ್ಕಾಗಿ ಪ್ರಯತ್ನಪಟ್ಟು ವಿಫಲನಾಗುವರು

ತುಂಗ ಶಾರದಳನ್ನು ವೀಣಾ ವಿದ್ವಾನ್ ನಾರಾಯಣ ಶರ್ಮರ ಬಳಿ ಕರೆದೊಯ್ದು, ಶಾರದಳ ದುಸ್ಥಿತಿಯ ಬಗ್ಗೆ ಮನ ಕರಗುವಂತೆ ವಿವರಿಸಿ, ಅವರು ಶಾರದಳನ್ನು ತರಬೇತಿ ನೀಡುವಂತೆ ಒಪ್ಪಿಸುವಳು

Read the rest of this entry »

ಸಂಚಿಕೆ-243

ಶಾರದ ಆವೇಶದಿಂದ ನನಗೆ ಕೃಪೆ ಮಾಡು, ಬಾಯಿ ಬರಿಸು, ನಾನೂ ನಿನ್ನಂತೆಯೇ ಕೀರ್ತನೆ ಹಾಡಿ ದೇವರನ್ನು ಒಲಿಸಿಕೊಳ್ಳುವೆ ಎನ್ನುವಳು. ಅದಕ್ಕೆ ಗಿರಿ, ನಿನಗೆ ಬಾಯಿಲ್ಲದಿದ್ದರೇನಂತೆ, ಕೈಗಳಿವೆ, ಯಾವುದಾದರೂ ಸಂಗೀತದ ವಾದ್ಯದ ಮುಖಾಂತರವೂ ನೀನು ಕೀರ್ತನೆಯನ್ನು ನುಡಿಸಿ, ದೇವರ ಸೇವೆ ಮಾಡಬಹುದು ಎನ್ನುತ್ತ “ಸುಲಭ ಪೂಜೆಯ ಮಾಡಿ” ಕೀರ್ತನೆ ಹಾಡುವಳು

Read the rest of this entry »

ಸುಲಭ ಪೂಜೆಯ ಮಾಡಿ ಬಲವಿಲ್ಲದವರು

ರಚನೆ: ಪುರಂದರ ದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್

ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನನಾಭನ ಪಾದನಳಿನ ಸೇವಕರು

Read the rest of this entry »

ಸಂಚಿಕೆ-242

ರಾತ್ರಿಯಾದರೂ ಬ್ರಾಹ್ಮಣ ಬಂದಿಲ್ಲ ಎಂದು ಗಿರಿಯ ಮನೆಯಲ್ಲಿ ಚಿಂತೆ. ಚಿಕ್ಕಪ್ಪನಿಗೆ ಚಿಕ್ಕಮ್ಮನ ಮೇಲೆ ಅನುಮಾನ. ಆದರೆ ಚಿಕ್ಕಮ್ಮ ತಾನೇನು ಮಾಡಿಲ್ಲ ಎಂದು ಒದ್ದಾಡುವರು. ಗಿರಿಗೆ ಗೊಂದಲ. ಗಂಟು ಇಲ್ಲಿಯೇ ಬಿಟ್ಟಿರುವುದರಿಂದ, ಬ್ರಾಹ್ಮಣ ಖಂಡಿತ ವಾಪಾಸು ಬರುವರು ಎನ್ನುವ ಭರವಸೆ

Read the rest of this entry »

« Older entries